Latest News

ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್ ಸೂಳೆ ಮಕ್ಕಳು ಎಂದವನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವರೇ?

Share News

ಬಂಟ್ವಾಳದಲ್ಲಿ ನಡೆದ ಎಸ್‌ಡಿಪಿಐ ಕಾರ್ಯಕರ್ತ ಅಬ್ದುಲ್ ರಹೆಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಣಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಜಿಲ್ಲೆಯ ಪೊಲೀಸ್ ವ್ಯವಸ್ಥೆ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಇದೀಗ ಮುಸ್ಲಿಂ ಸಮುದಾಯ ಸಿಡಿದೆದ್ದಿದ್ದು ಆಕ್ರೋಶ ವ್ಯಕ್ತಪಡಿಸುತ್ತಿದೆ. ಕಾಂಗ್ರೆಸ್‌ ಪಕ್ಷದ ಸದಸ್ಯತ್ವಕ್ಕೆ, ಜವಾಬ್ದಾರಿಗಳಿಗೆ ಮುಸ್ಲಿಮ್‌ ಮುಖಂಡರು ರಾಜೀನಾಮೆ ನೀಡುತ್ತಿದ್ದಾರೆ. ವಾಟ್ಸ್ಯಾಪ್‌, ಫೇಸ್‌ಬುಕ್‌ ಮೂಲಕವೂ ಕಾಂಗ್ರೆಸ್‌ ನಾಯಕರ ವಿರುದ್ಧ ಸಮರ ಸಾರಿದ್ದಾರೆ. ಕಾಂಗ್ರೆಸ್‌ ನಾಯಕರನ್ನು ತುಚ್ಛವಾಗಿ ನಿಂದಿಸಿರುವ ವಾಟ್ಸಾಪ್‌ ವಾಯ್ಸ್‌ ಹರಿದಾಡುತ್ತಿದೆ.

ವೈರಲ್‌ ಆದ ಆಡಿಯೋದಲ್ಲಿ, “ನಿನ್ನೆ ಮೂರುಗಂಟೆಗೆ ಆತನನ್ನು ಕೊಲೆಗೈಯಲಾಗಿದೆ ಒಬ್ಬನೇ ಒಬ್ಬ ಕಾಂಗ್ರೆಸ್‌ ನಾಯಕ ಈ ಬಗ್ಗೆ ಹೇಳಿಕೆ ನೀಡಿಲ್ಲ ಎಲ್ಲಿದ್ದಾರೆ ಕಾಂಗ್ರೆಸ್‌ ನಾಯಕರು, ಸತ್ತು ಹೋಗಿದ್ದಾರಾ? ಈ ಸಿದ್ದರಾಮಯ್ಯ ಎಲ್ಲಿದ್ದಾನೆ ಸೂಳೆಮಗ, ಅವ ಎಲ್ಲಿದ್ದಾನೆ ಪರಮೇಶ್ವರ್‌, ಡಿಕೆಶಿ ಎಲ್ಲಿದ್ದಾನೆ, ಸಾಬು ಎಲ್ಲಿದ್ದಾನೆ? ಎಲ್ಲಿದ್ದಾರೆ ಈ ರಂಡೆಮಕ್ಕಳು ಉಸ್ತುವಾರಿ ಸಚಿವ ಎಲ್ಲಿದ್ದಾನೆ. ಉಳ್ಳಾಲ ಮಸೀದಿಗೆ ಬಂದು ನಾಟಕ ಮಾಡಿದ್ದಾರೆ. ಆಂಟಿ ಕಮ್ಯುನಲ್‌ ಫೋರ್ಸ್‌ ರಚಿಸುತ್ತೇನೆ ಎಂದು ಗೃಹ ಸಚಿವ ಹೇಳಿದ್ದಾನೆ, ಅದು ನಮಗಲ್ಲ, ಅದು ಅವನ ಪುತ್ರ ಚಕ್ಕನಿಗೆ ಆಗಿರಬಹುದು” ಎಂದು ತುಚ್ಛ ಮತ್ತು ಅಶ್ಲೀಲವಾಗಿ, ನಿಂದನೆ ಮಾಡಲಾಗಿದೆ.

ಇನ್ನೊಂದು ಆಡಿಯೋದಲ್ಲಿ “ಬ್ಯಾರಿಗಳ ಓಟು ತಿನ್ನಲು ಇವರಿಗೆ ಭಾರಿ ಕುಶಿ ಆಗುತ್ತದೆ, ಏಕೆಂದರೆ ಬ್ಯಾರಿಗಳು ಸುಮ್ಮನಿರುತ್ತಾರೆ ಅಲ್ವಾ. ಮೊನ್ನೆ ಉಳ್ಳಾಲಕ್ಕೆ ಡಿಕೆಶಿ ಬಂದಾಗ, ನಮ್ಮ ಮುಂಡೆಮಕ್ಕಳು ಅವನ ಕೈಕಾಲು ಒತ್ತುತ್ತಿದ್ದರು, ಪಾದ ಪೂಜೆ ಮಾಡಿದ್ದರು. 50 ಆಡು ಕೊಟ್ಟದ್ದೇ ಕೊಟ್ಟದ್ದು ಮುಂಡಾಸುಧಾರಿಗಳು ದುಆ ತೆಗೆದದ್ದೇ ತೆಗೆದದ್ದು” ಎಂದು ಜರೆದಿದ್ದಾನೆ.

ರೆಹಮಾನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಟ್ಸ್ಯಾಪ್‌ ಗ್ರೂಪ್‌ ಒಂದರಲ್ಲಿ ನಡೆದ ಚರ್ಚೆಯ ವೇಳೆ ಮುಸ್ಲಿಂ ಯುವಕನೊಬ್ಬ ಈ ರೀತಿ ವಾಯ್ಸ್‌ ಹಾಕಿದ್ದು ಎನ್ನಲಾಗಿದೆ. ರಾಜ್ಯದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರ ವಿರುದ್ಧ ಈ ರೀತಿ ಅಶ್ಲೀಲ ಮತ್ತು ನಿಂದನಾತ್ಮಕ ಪದ ಪ್ರಯೋಗ ನಡೆಸಿರುವುದು ವ್ಯಾಪಕ ಆಕ್ರೋಶಕ್ಕೆ ಒಳಗಾಗಿದ್ದು, ವಾಯ್ಸ್‌ ಹಾಕಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಜನರು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button