Latest Newsರಾಜಕೀಯ

ರಾಹುಲ್‌ ಗಾಂಧಿ ಹುಚ್ಚ : ಕೇಸ್‌ ದಾಖಲು

Share News

ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ವಿರುದ್ಧ ರಾಜ್ಯ ಸರ್ಕಾರ ಪೊಲೀಸ್‌ ಇಲಾಖೆಯ ಮೂಲಕ ಕೇಸ್‌ ದಾಖಲಿಸಿದೆ.

ಕಾಂಗ್ರೆಸ್ ಕಾರ್ಪೊರೇಟರ್ ಅನಿಲ್ ಕುಮಾರ್ ನೀಡಿದ ದೂರಿನಂತೆ ಮಂಗಳೂರಿನ ಕಾವೂರು ಠಾಣೆಯಲ್ಲಿ ಬಿಎಂಎಸ್ 350 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ “ಹಿಂದೂಗಳು ಹಿಂಸಾವಾದಿಗಳು” ಎಂಬ ಹೇಳಿಕೆಯನ್ನು ಖಂಡಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯ ವೇಳೆ “ರಾಹುಲ್‌ ಗಾಂಧಿಯನ್ನು ಸಂಸತ್ತಿನ ಒಳಗೆ ಕೂಡಿಹಾಕಿ ಹಾಕಿ ಕೆನ್ನೆಗೆ ಎರಡು ಬಾರಿಸಬೇಕು, ಅವನೊಬ್ಬ ಹುಚ್ಚ” ಎಂದು ಅಬ್ಬರಿಸಿದ್ದರು.

ರಾಹುಲ್‌ ಗಾಂಧಿ ಹುಚ್ಚ ಎಂಬ ಹೇಳಿಕೆಯ ವಿರುದ್ಧ ಕಾಂಗ್ರೆಸ್‌ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಕೂಡಾ ನಡೆಸಿತ್ತು.

Related Articles

Leave a Reply

Your email address will not be published. Required fields are marked *

Back to top button